Slide
Slide
Slide
previous arrow
next arrow

ಜಿಲ್ಲಾಮಟ್ಟದ ಭಜನಾ ಸ್ಪರ್ಧೆ: ಸ್ವರ್ಣವಲ್ಲೀ ಮಾತೃವೃಂದಕ್ಕೆ ತೃತೀಯ ಸ್ಥಾನ

300x250 AD

ಶಿರಸಿ: ಕುಮಟಾದಲ್ಲಿ ನಡೆದ ಜಿಲ್ಲಾ‌ ಮಟ್ಟದ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ ಸ್ವರ್ಣವಲ್ಲೀಯ ಮಾತೃವೃಂದ‌‌‌ ತಂಡವು ತೃತೀಯ ಸ್ಥಾನ ಪಡೆದುಕೊಂಡಿದೆ.

ಕುಮಟಾದ ನೆಲ್ಲಿಕೇರಿ ಮಹಾ ಸತಿ ದೇವಸ್ಥಾನದಲ್ಲಿ ಯುಗಾದಿ ಉತ್ಸವ ಸಮಿತಿ‌ ಏರ್ಪಡಿಸಿದ ಭಜನಾ ಸ್ಪರ್ಧೆ ಇದಾಗಿತ್ತು. ೩೦೦೧ ರೂ. ನಗದು ಪ್ರಶಸ್ತಿ ಪತ್ರದೊಂದಿಗೆ ಸ್ವರ್ಣವಲ್ಲೀ‌ ಮಾತೃ ವೃಂದ ಬಹುಮಾನ ಪಡೆದುಕೊಂಡಿದೆ. ಭಜನಾ ತಂಡದಲ್ಲಿ ಸುಮನಾ ಭಟ್ಟ ಬೆಣ್ಣೆಗದ್ದೆ, ಚಂದ್ರಕಲಾ ಭಟ್ಟ ಬೊಮ್ಮನಳ್ಳಿ, ವಿಶಾಲಾಕ್ಷಿ ಭಟ್ಟ ಬೊಮ್ಮನಳ್ಳಿ, ಗೀತಾ ಹೆಗಡೆ ಶೀಗೆಮನೆ, ಚೇತನಾ ಹೆಗಡೆ ಬೆಳ್ಮನೆ, ಶೃತಿ ವೈದ್ಯ ಸ್ವರ್ಣವಲ್ಲೀ, ಸಂಧ್ಯಾ ಹೆಗಡೆ ಕೊರ್ಸೆ ಭಾಗವಹಿಸಿದ್ದರು. ಹಾರ್ಮೋನಿಯಂನಲ್ಲಿ ಕೆ.ಪಿ. ಹೆಗಡೆ, ತಬಲಾದಲ್ಲಿ ರವಿ ಹೆಗಡೆ ಪಡಿಗೆರೆ ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top